ಎ. ಎಲ್ಲಪ್ಪ ನಿರ್ಮಿಸುತ್ತಿರುವ ಬಂಗಾರಿ ಚಿತ್ರಕ್ಕೆ ಇತ್ತೀಚೆಗೆ ಭೂಮಿಕಾ ಸ್ಟುಡಿಯೋದಲ್ಲಿ ರಿರೆಕಾರ್ಡಿಂಗ್ ಕಾರ್ಯ ನಡೆಯಿತು. ಸಧ್ಯದಲ್ಲೇ ಪ್ರಥಮ ಪ್ರತಿ ಸಿದ್ದವಾಗಲಿದ್ದು, ಚಿತ್ರವನ್ನು ನವೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ.
ಮಾ ಚಂದ್ರು ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎ.ಆರ್. ನಿರಂಜನ್ ಬಾಬು ಛಾಯಾಗ್ರಹಣ, ಎ.ಎಂ. ನೀಲ್ ಸಂಗೀತ, ಜಯಂತ್ ಕಾಯ್ಕಿಣಿ, ರಾಮ್ ನಾರಾಯಣ್, ವಿಜಯ ಭರಮಸಾರ ಸಾಹಿತ್ಯ, ಮಾಲೂರು ಶ್ರೀನಿವಾಸ್, ಕಂಬಿ ರಾಜು ದೇವಸಂಪತ್ ನೃತ್ಯ ನಿರ್ದೇಶನ, ಮಾಸ್ ಮಾದ ಸಾಹಸ, ಕೆ.ಎಂ. ಪ್ರಕಾಶ್ ಸಂಕಲನವಿದೆ. ಯೋಗೀಶ್, ರಾಗಿಣಿ, ಸಾಧುಕೋಕಿಲ, ದಂಡಪಾಣಿ, ಸುಮನಶೆಟ್ಟಿ, ರಮೇಶ್ ಭಟ್, ಸ್ವಯಂವರ ಚಂದ್ರು, ಸತ್ಯಪ್ರಿಯ, ಶಂಕರ್ ಭಟ್, ಶರತ್ ಲೋಹಿತಾಶ್ವ ಅಭಿನಯಿಸುತ್ತಿದ್ದಾರೆ.